ವಿದ್ಯಾ ಬುದ್ಧಿ ಕೊಡುವ ಶಾರದಾಂಬೆ ಪವಾಡ

34

ವಿದ್ಯಾ ಬುದ್ಧಿ ಕೊಡುವ ಶಾರದಾಂಬೆ ಶೃಂಗೇರಿಯಲ್ಲಿ ನೆಲಸಿದ್ದು ಈ ಕಾರಣಕ್ಕಾಗಿಯೇ. ಸ್ನೇಹಿತರೆ ಶೃಂಗೇರಿ ಶಾರದಾ ಮಾತೆಯ ಆವಾಸಸ್ಥಾನ ದೇಶ ವಿದೇಶದಿಂದಲೂ ಇಲ್ಲಿಗೆ ಭಕ್ತರ ದಂಡು ಹರಿದು ಬರುತ್ತದೆ ಹಾಗಾದರೆ ವಿದ್ಯಾ ಬುದ್ಧಿ ಕೊಡುವ ಶಾರದಾಂಬೆ ಇಲ್ಲಿಗೆ ಬಂದು ನೆಲಸಿದರು ಏಕೆ ಶಂಕರಾಚಾರ್ಯರು ಈ ಕ್ಷೇತ್ರ ಸ್ಥಾಪಿಸಲು ಕಾರಣ ಏನು ಈ ಪುಣ್ಯ ಕ್ಷೇತ್ರದ ವಿಶಿಷ್ಟತೆ ಏನು ಈ ರಹಸ್ಯಕಾರಿ ಅಂಶವನ್ನು ಈ ಲೇಖನದಲ್ಲಿ ತಿಳಿಸುತ್ತೇವೆ. ಶೃಂಗೇರಿ ಶಾರದೆ ಅಕ್ಷರಾಭ್ಯಾಸ ವಿಷಯಕ್ಕೆ ತುಂಬಾ ಫೇಮಸ್ ಚಿಕ್ಕಮಗಳೂರಿನಿಂದ 90 ಕಿಮೀ ದೂರದಲ್ಲಿ ಇರುವ ಶೃಂಗೇರಿಯಲ್ಲಿ ಈ ಕ್ಷೇತ್ರ ಇದೆ ತುಂಗಾ ತೀರದಲ್ಲಿ ನಿಂತಿರುವ ಶಾರದಾ ದೇವಿಯು ತುಂಬಾ ವಿಶೇಷತೆಗಳನ್ನು ಒಳಗೊಂಡಿದೆ.

ಶೃಂಗೇರಿ ಈ ಹಿಂದೆ ಶೃಂಗ ಗಿರಿ ಎಂದು ಪ್ರಸಿದ್ಧಿ ಆಗಿತ್ತು ಇಲ್ಲಿ ವೃಷ್ಯ ಶೃಂಗರು ತಪಸ್ಸು ಮಾಡಿದರು ಅಲ್ಲದೆ ಇಡೀ ಊರು ಬರಗಾಲದಿಂದ ತತ್ತರಿಸುವಾಗ ಯಜ್ಞ ಯಾಗಾದಿಗಳನ್ನು ಮಾಡಿ ಮಳೆ ತರಿಸುತ್ತಾ ಇದ್ದರು ಇದೇ ಕಾರಣಕ್ಕೆ ಈ ಊರಿಗೆ ಶೃಂಗೇರಿ ಎನ್ನುವ ಹೆಸರು ಬಂತು ಎಂದು ಹೇಳಲಾಗುತ್ತದೆ. ಮತ್ತೊಂದು ಮೂಲಗಳ ಪ್ರಕಾರ ಇಲ್ಲಿನ ಗಿರಿಗಳು ಗೋವುಗಳ ಕೊಂಬಿಗೆ ಹೋಲುವುದರಿಂದ ಈ ಊರನ್ನು ಶೃಂಗೇರಿ ಎಂದು ಕರೆಯಲಾಗುತ್ತದೆ. ಚಿಕ್ಕ ವಯಸ್ಸಿನಲ್ಲಿ ದೇಶ ಸುತ್ತಿದ ಶಂಕರಾಚಾರ್ಯರು ದೇಶದ ನಾಲ್ಕೂ ದಿಕ್ಕುಗಳಲ್ಲಿ ನಾಲ್ಕು ಪೀಠಗಳನ್ನು ಸ್ಥಾಪಿಸಿದರು ಉತ್ತರದ ಬದಲೆಯಲ್ಲಿ ಪೂರ್ವದ ಪುರಿಯಲ್ಲಿ ಪಶ್ಚಿಮದ ದ್ವಾರಕಾದಲ್ಲಿ ಮತ್ತು ದಕ್ಷಿಣದ ಶೃಂಗೇರಿಯಲ್ಲಿ ಪುಣ್ಯ ಪೀಠಗಳನ್ನು ಪ್ರತಿಷ್ಠಾಪಿಸಿದರು.

ಆದರೆ ಶೃಂಗೇರಿ ಪೀಠ ಸ್ಥಾಪನೆ ಹಿಂದೆ ಒಂದು ಆಶ್ಚರ್ಯಕರ ಸಂಗತಿ ಇದೆ ದೇಶ ಪರ್ಯಾಟನೆಯಲ್ಲಿ ಬ್ಯೂಸಿ ಆಗಿದ್ದ ಶಂಕರಾಚಾರ್ಯರು ತುಂಗಾ ತೀರದ ಶೃಂಗೇರಿಗೆ ಬಂದಾಗ ಅವರಿಗೆ ಶಾಕಿಂಗ್ ವಿಷಯ ಕಾದಿತ್ತು ಕಾಳಿಂಗ ಸರ್ಪ ಒಂದು ಬಿಸಿಲಿನಿಂದ ನರಳುತ್ತಾ ಇತ್ತು ಅದು ಒಬ್ಬ ಗರ್ಭಿಣಿ ಕಪ್ಪೆಗೆ ನೆರಳು ಕೊಡುತ್ತಾ ಇತ್ತು. ಇದನ್ನು ಕಂಡು ಶಂಕರಾಚಾರ್ಯರು ಪರಸ್ಪರ ಶತ್ರುಗಳಾದ ಹಾವು ಕಪ್ಪೆ ಗಳೇ ವರ್ತಿಸುತ್ತಾ ಇವೆ ಇದಕ್ಕಿಂತ ಪುಣ್ಯ ಕ್ಷೇತ್ರ ಮತ್ತೊಂದು ಇಲ್ಲ ಎಂದು ತಿಳಿದು ಶಾರದಾ ಪೀಠ ಸ್ಥಾಪನೆ ಮಾಡಿದರು. ಈಗಲೂ ದೇವಸ್ಥಾನಕ್ಕೆ ಹೋದರೆ ತುಂಗಾ ನದಿ ತೀರದಲ್ಲಿ ಈ ಅಪರೂಪದ ಸನ್ನಿವೇಶದ ಕಲ್ಲಿನ ಶಿಲ್ಪ ಇದೆ. ವಿಜಯನಗರ ಅರಸನ ಕಾಲದಲ್ಲಿ ದೇಗುಲ ನಿರ್ಮಾಣ ಆಯಿತು.

ಆದಿ ಶಂಕರಾಚಾರ್ಯರು ಶೃಂಗೇರಿಯಲ್ಲಿ ಶಾರದಾ ಪೀಠ ಸ್ಥಾಪಿಸಿದರು ಆದರೆ 14 ನೆಯ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪಕರಾದ ಅಕ್ಕ ಬಿಕ್ಕಾದ ವಿದ್ಯಾರಣ್ಯ ದೇಗುಲ ನಿರ್ಮಿಸಿದರು ಎಂದು ಇತಿಹಾಸ ಹೇಳುತ್ತದೆ ಆದರೆ ಹೊಯ್ಸಳರ ಕಾಲದಲ್ಲಿ ದೇಗುಲ ನಿರ್ಮಾಣ ಆಗಿತ್ತು ಅಂತ ವಾಸ್ತು ಶಿಲ್ಪ ಹೇಳುತ್ತದೆ ಈಗ ಪಕ್ಕದಲ್ಲಿ ಹೊಸ ದೇವಾಲಯ ಸ್ಥಾಪನೆ ಆಗಿದ್ದರೂ ಹೊಸ ದೇವಾಲಯ ಇತಿಹಾಸ ಸೌಂದರ್ಯಕ್ಕಾಗಿ ಪಕ್ಕದಲ್ಲಿ ನಿಂತಿದೆ ಶ್ರೀ ಕ್ಷೇತ್ರದಲ್ಲಿ ಶ್ರೀ ವಿದ್ಯಾ ಶಂಕರ ಮತ್ತು ಶ್ರೀ ಶಾರದಾಂಬೆ ಗುಡಿಗಳೊಂದಿಗೆ ಹಲವಾರು ದೇವರುಗಳ ಸಾನಿಧ್ಯವಿದೆ ಶಕ್ತಿ ಗಣಪತಿ ತೋರಣ ಗಣಪತಿ ಕಾಲ ಭೈರವ ಹರಿಹರೇಶ್ವರ ಆಂಜನೇಯ ಕಾಳಿಕಾಂಬ ದುರ್ಗಾಂಬಾ ಕಾಳಿಕಾಂಬ ಗಣಪತಿ ಸೇರಿದಂತೆ ಇನ್ನೂ ಹಲವಾರು ಗುಡಿಗಳು ಇವೆ.

ವಂಶ ಪಾರಂಪರ್ಯ ಜೋತಿಷ್ಯ ಶಾಸ್ತ್ರ ಹೇಳುತ್ತಾ ಬಂದಿರುವ ವಿದ್ವಾನ್ ವಾಸುದೇವನ್ ಅವರು ನಿಮ್ಮ ಸಮಸ್ಯೆಗಳು ಕೇಳದೆ ನಿಮ್ಮ ಧ್ವನಿ ಮುಖಾಂತರ ಅರಿತುಕೊಂಡು ಫೋನ್ ನಲ್ಲಿಯೇ ಸೂಕ್ತ ಮಾರ್ಗದರ್ಶನ ನೀಡುತ್ತಾರೆ . ಸಮಸ್ಯೆಗಳು ಏನೇ ಇರಲಿ ಪರಿಹಾರ ಮಾತ್ರ ನಿಶ್ಚಿತ. ನಿಮ್ಮ ಮನೆಯಲ್ಲಿ ಅಥವ ಜೀವನದಲ್ಲಿ ಯಾವುದೇ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರು ವಾಸುದೇವನ್ ಅವರಿಗೆ ಒಂದೇ ಒಂದು ಕರೆ ಮಾಡಿರಿ ಖಂಡಿತ ನಿಮಗೆ ಸಾಕಷ್ಟು ಒಳಿತು ಆಗಲಿದೆ.

LEAVE A REPLY

Please enter your comment!
Please enter your name here